ಉಡುಪಿ: ನಾಳೆ (15.02.2025) ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕ ಸಂಘದ ಉಡುಪಿ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಜಿಲ್ಲಾಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆ ಯಲಿದೆ.
ಕಾರ್ಯಕ್ರಮವನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ಶಾಸಕರಾದ ಎಸ್ ಎಲ್ ಭೋಜೇಗೌಡರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘ ರಾಜ್ಯಧ್ಯಕ್ಷರಾದ ಸಿದ್ದ ಬಸಪ್ಪ, ಮಣಿಪಾಲ ಎಚ್ ಪಿ ಆರ್ ಸಮೂಹ ಸಂಸ್ಥೆಗಳ ಆದ್ಯಕ್ಷರಾದ ಲ| ಹರಿಪ್ರಸಾದ್ ರೈ, ಉಪನಿರ್ದೇಶಕರಾದ ಗಣಪತಿ ಕೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಎಲ್ಲಮ್ಮ ಮತ್ತಿತರರು ಭಾಗವಹಿಸ ಲಿದ್ದಾರೆ