Header Ads Widget

ಸ್ಕೇಟಿಂಗ್​ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳಿಂದ ​ರಾಷ್ಟ್ರ ಮಟ್ಟಕ್ಕೆ ಆಯ್ಕೆ​

ವೈಷ್ಣವ್ ಲಕ್ಷ್ಮೀನಾರಾಯಣ ಉಪಾಧ್ಯ ಇವರು ಟಿ.ಎ.ಪೈ.ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು  ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಯಾಗಿದ್ದು ​, ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಸ್ಕೇಟಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ​ ​ರಾಷ್ಟ್ರ ಮಟ್ಟಕ್ಕೆ ಸತತ ಮೂರು ವರ್ಷಗಳ ಕಾಲ​ ಆಯ್ಕೆಯಾಗಿ ರುತ್ತಾರೆ.


ಇವರಿಗೆ ಕರ್ನಾಟಕ ಸರ್ಕಾರ​ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ​ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಜಿಲ್ಲಾಮಟ್ಟದ​ ​2024-25ನೇಯ ಸಾಲಿನ ಪ್ರಶಸ್ತಿ ಪತ್ರವನ್ನು ದಿನಾಂಕ 26.01.2025ರಂದು ಗಣರಾಜೋತ್ಸವದ ಪ್ರಯುಕ್ತ ಮಹಾತ್ಮ​ ಗಾಂಧಿ ಕ್ರೀಡಾಂಗಣ ಅಜ್ಜರ ಕಾಡು ಇಲ್ಲಿ ಕಂದಾಯ ಸಚಿವರಾದ​ ಶ್ರೀ ಕೃಷ್ಣ ಬೈರೇಗೌಡ ಇವರಿಂದ ಪಡೆದರು.



ಇವರು​ ಉಡುಪಿ ಅಂಬಲಪಾಡಿಯ​ ಹರ್ಷಿಣಿ ಮತ್ತು ಶ್ರೀ​ ಲಕ್ಷ್ಮೀನಾರಾಯಣ  ಉಪಾಧ್ಯ ಇವರ ಸುಪುತ್ರ. ಮುಖ್ಯ ಶಿಕ್ಷಕಿ ವಿನೋದಾ ಶೆಟ್ಟಿ ಮತ್ತು ದೈಹಿಕ ಶಿಕ್ಷಕ ಸುಧೀರ್ ಕುಮಾರ್ ಅವ​ರು ವೈಷ್ಣವ್ ​ರವ ರನ್ನು ಅಭಿನಂದಿಸಿದ್ದಾರೆ.