Header Ads Widget

​ಮಲಬಾರ್ ಗ್ರೂಪ್ ನಿಂದ ಕರ್ನಾಟಕದ 5501 ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಣೆ

ಬೆಂಗಳೂರು:  ಭಾರತದ ಮುಂಚೂಣಿಯಲ್ಲಿರುವ ವ್ಯವಹಾರಿಕ ಸಮೂಹ ಸಂಸ್ಥೆ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ ಇದರ  ಪೋಷಕ ಸಂಸ್ಥೆಯಾಗಿರುವ ಮಲಬಾರ್ ಗ್ರೂಪ್ ಕರ್ನಾಟಕದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹೆಣ್ಣು ಮಕ್ಕಳಿಗೆ  ವಿದ್ಯಾರ್ಥಿ ವೇತನವನ್ನು ಘೋಷಣೆ ಮಾಡಿದೆ. 


ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿ ವೇತನ ಯೋಜನೆಯನ್ನು ಘೋಷಣೆ ಮಾಡಲಾಯಿತು.  ಸಮೂಹದ ಫ್ಲಾಗ್‌ಶಿಪ್ ಯೋಜನೆಯಾದ ಸಿಎಸ್‌ಆರ್ ಉಪಕ್ರಮದಡಿಯ ಮಲಬಾರ್ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಈ ಘೋಷಣೆ ಒಂದು ಮಹತ್ವದ ಮೈಲಿಗಲ್ಲಾಗಿದೆ. 

ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಬದ್ಧತೆಯನ್ನು ತೋರಿಸುತ್ತದೆ. ಈ ಕಾರ್ಯಕ್ರ ಮವನ್ನು ಕರ್ನಾಟಕ  ಸರ್ಕಾರದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವ ಕುಮಾರ್‌ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ ಎನ್.ಎ.ಹ್ಯಾರೀಸ್ ಉಪಸ್ಥಿತರಿದರು. 


ಮಲಬಾರ್ ಗ್ರೂಪ್‌ನ ಅಧ್ಯಕ್ಷರಾದ ಎಂ.ಪಿ.ಅಹಮ್ಮದ್‌ರವರು, ಮಲಬಾರ್ ಗ್ರೂಪ್‌ನ ಇಂಡಿಯಾ ಕಾರ್ಯಾಚರಣೆಗ ವ್ಯವಸ್ಥಾಪಕ ನಿರ್ದೇಶಕ ಓ ಅಷರ್ , ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು ಬಿ.ಪಿ, ವಲಯ ಮುಖ್ಯಸ್ಥರಾದ ರಿಬಿನ್ ತೌಫೀಕ್, ಕೆ. ಮನ್ಸೂರ್ ಅಲಂ ಮತ್ತು ಶರಿಫುದ್ದೀನ್ ಪಿ ರವರು ಸೇರಿದಂತೆ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಆಡಳಿತ ಮಂಡಳಿ ಸದಸ್ಯರು ಗ್ರಾಹಕರು, ಹಿತೈಷಿಗಳು ಮತ್ತು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. 


ಈ ವರ್ಷ ಭಾರತದಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ 16 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಈ ಹಣವನ್ನು 21,000ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವಿತರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ 491 ಕಾಲೇಜುಗಳ  5501 ಹೆಣ್ಣು ಮಕ್ಕಳ  ವ್ಯಾಸಂಗಕ್ಕೆ ನೆರವಾಗುವ ದೃಷ್ಟಿಯಿಂದ ಒಟ್ಟು 4.24 ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಲಾ ಗುತ್ತಿದೆ. 


ಈ ಸಂದರ್ಭದಲ್ಲಿ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹಮ್ಮದ್‌ರವರು, ``ಜಗತ್ತಿನ ಬದಲಾವಣೆಗೆ ಶಿಕ್ಷಣ ಒಂದು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ನಮ್ಮ ವಿದ್ಯಾರ್ಥಿವೇತನ ಕಾರ್ಯ ಕ್ರಮವು ಮಲಬಾರ್ ಗ್ರೂಪ್‌ನ ಆಳವಾದ ಬೇರೂರಿರುವ ನಂಬಿಕೆಯ ನೇರ ಪ್ರತಿಬಿಂಬವಾಗಿದೆ ಶಿಕ್ಷಣವು ಅವಕಾಶಗಳನ್ನು ತೆರೆಯುತ್ತದೆ ಮತ್ತು ಜೀವನವನ್ನು ಪರಿವರ್ತಿಸುತ್ತದೆ. 


ಯುವ ಹೆಣ್ಣುಮಕ್ಕಳು ತಮ್ಮ ಶೈಕ್ಷಣಕ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಸಮಾಜಕ್ಕೆ ಅರ್ಥ ಪೂರ್ಣವಾಗಿ ಕೊಡುಗೆ ನೀಡಲು ಸಾಧ್ಯವಾಗಿ ಈ  ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಬದ್ಧರಾಗಿ ದ್ದೇವೆ’’ ಎಂದು ತಿಳಿಸಿದರು. ಆರಂಭದಿ೦ದಲೂ ಮಲಬಾರ್ ಗ್ರೂಪ್ ತನ್ನ ಸಾಮಾಜಿಕ ಕಲ್ಯಾಣ ಚಟುವಟಿಕೆ ಗಳ ಮೂಲಕ ಸಮಗ್ರ ಬೆಳವಣಿಗೆಗೆ ಪೂರಕವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.



1999ರಲ್ಲಿ ಮಲಬಾರ್ ಚಾರಿಟೆಬಲ್ ಟ್ರಸ್ಟ್(ಎಂಸಿಟಿ) ಅನ್ನು ರಚನೆ ಮಾಡಲಾಯಿತು. ಇದರ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವುದು ಮತ್ತು ವಿಸ್ತರಣೆ ಮಾಡುವ ಕಾರ್ಯಗಳನ್ನು ನಡೆಸಲಾಗುತ್ತಿದೆ. ಸಮೂಹ ಸಂಸ್ಥೆಯು ತನ್ನ ವಾರ್ಷಿಕ ಲಾಭದ ಶೇ.5 ರಷ್ಟು ಭಾಗವನ್ನು ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಸರ ಸುಸ್ಥಿರತೆ  ಮತ್ತು ಬಡತನ ನಿರ್ಮೂಲನೆಯನ್ನು ಒಳಗೊಂಡ ಸಿಎಸ್‌ಆರ್ ಉಪಕ್ರಮಗಳಿಗೆ ಮೀಲಿಡುತ್ತಿದೆ. 


ಇದು ದುರ್ಬಲ ವರ್ಗದ ಸಮುದಾಯಗಳ ¸ ಸಬಲೀಕರಣದ ಉನ್ನತಿಗೆ ಸಹಕಾರಿಯಾಗುತ್ತಿದೆ  2007 ರಲ್ಲಿ ಆರಂಭವಾದ ಮಲಬಾರ್ ರಾಷ್ಟ್ರೀಯ  ವಿದ್ಯಾರ್ಥಿವೇತನ ಕಾರ್ಯಕ್ರಮವು ಅದರ ಸಿಎಸ್‌ಆರ್ ಚೌಕಟ್ಟಿನಡಿಯಲ್ಲಿ  ಒಂದು ಅತ್ಯಂತ ಪ್ರಮುಖವಾದ ಉಪಕ್ರಮವಾಗಿದೆ. ಇಲ್ಲಿವರೆಗೆ ಈ ಕಾರ್ಯಕ್ರಮ ವನ್ನು ಬೆಂಬಲಿಸುವ  ನಿಟ್ಟಿನಲ್ಲಿ 60 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದು, ಭಾರತ ದಾದ್ಯಂತ 95,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಗಿದೆ. 


ಮತ್ತು ಕರ್ನಾಟಕ ರಾಜ್ಯದ 26,066 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ 16.82ಕೋಟಿ ರೂಪಾಯಿಗಳ ನೆರವನ್ನು ನೀಡಲಾಗಿದೆ. ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ  ಕೇಂದ್ರೀಕರಿಸುವ ಮೂಲಕ ಮಲಬಾರ್ ಗ್ರೂಪ್ ವ್ಯಕ್ತಿಗಳನ್ನು ಮಾತ್ರವಲ್ಲದೇ ಇಡೀ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. 


ಈ ಮೂಲಕ ಭವಿಷ್ಯದ ಪೀಳಿಗೆಗಳು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಾಧನಗಳೊಂದಿಗೆ ಸಜ್ಜುಗೊಂಡಿವೆ ಎಂಬುದನ್ನು ಖಚಿತಪಡಿಸುತ್ತದೆ. ವಿದ್ಯಾರ್ಥಿವೇತನ ಕಾರ್ಯಕ್ರಮವಲ್ಲದೇ, ಮಲಬಾರ್ ಗ್ರೂಪ್‌ನ ಹಸಿವು ಮುಕ್ತ ಜಗತ್ತು ಯೋಜನೆಯು ದೇಶದಾದ್ಯಂತದ ದುರ್ಬಲ ವರ್ಗದವರಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮಕ್ಕೆಸ್ಥಳೀಯ  ಎನ್‌ಜಿಒಗಳು ಮತ್ತು ಸ್ವಯಂ ಸೇವಕರ ಪಾಲುದಾರಿಕೆಯನ್ನು ಪಡೆಯಲಾಗುತ್ತಿದೆ. 


ಈ ಮೂಲಕ ಹಸಿವನ್ನು ಮುಕ್ತಗೊಳಿಸುವುದು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸುವ ಬದ್ಧತೆಯನ್ನು ಈ ಉಪಕ್ರಮ ಹೊಂದಿದೆ. ಪ್ರಸ್ತುತ ದೇಶದ 17 ರಾಜ್ಯಗಳ  81ನಗರಗಳಲ್ಲಿ ಪ್ರತಿದಿನ 60,000ಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಝಾಂಬಿಯಾ ದೇಶ ದಲ್ಲಿ ಶಾಲಾ ಮಕ್ಕಳಿಗೆ ಪ್ರತಿದಿನ 10,000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ. ಮಲಬಾರ್ ಗ್ರೂಪ್ ಈ ಕಾರ್ಯಕ್ರಮವನ್ನು ಭಾರತದ 200 ಕೇಂದ್ರಗಳಲ್ಲಿ ಪ್ರತಿದಿನ 1,00,000ಅಧಿಕ ಜನರಿಗೆ ಊಟವನ್ನು ವಿತರಣೆ ಮಾಡಲು ಕಾರ್ಯಕ್ರಮ ರೂಪಿಸಿದೆ. 


ಈ ಹಸಿವು ಮುಕ್ತ ಜಗತ್ತು ಯೋಜನೆಯನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಯಾದ ಥನಲ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮಲಬಾರ್ ಗ್ರೂಪ್ ವೃದ್ಧ ಮಹಿಳೆಯರಿಗಾಗಿ ಗ್ರಾಂಡ್‌ಮಾ ಹೋಂ ಯೋಜನೆಯನ್ನೂ ಆರಂಭಿಸಿದೆ. ಇಲ್ಲಿ ನಿರ್ಗತಿಕ ಮಹಿಳೆಯರು, ವೃದ್ಧೆಯರಿಗೆ ಸಂಪೂರ್ಣ ಉಚಿತವಾಗಿ ಸುಸಜ್ಜಿತ ಆಶ್ರಯವನ್ನು ನೀಡಲಾಗುತ್ತಿದೆ. 


ಅವರಿಗೆ ಪೌಷ್ಟಿಕ ಆಹಾರ, ಔಷಧೋಪಚಾರ, ಆರೈಕೆ ಮಾಡಲಾಗುತ್ತಿದೆ. ಪ್ರಸ್ತುತ, ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಈ ಮನೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಮನೆಗಳನ್ನು ಕೇರಳದ ಪ್ರಮುಖ ನಗರಗಳು, ಚೆನ್ನೈ, ಕೋಲ್ಕತ್ತಾ, ದೆಹಲಿ ಮತ್ತು ಮುಂಬೈನಲ್ಲೂ ಆರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. 


ಶಾಲೆಯಿಂದ ಹೊರಗುಳಿದ ಮಕ್ಕಳ  ಶಿಕ್ಷಣಕ್ಕಾಗಿ ನಾವು 12 ರಾಜ್ಯಗಳಲ್ಲಿ 581ಮೈಕ್ರೋ-ಲರ್ನಿಂಗ್ ಸೆ೦ಟರ್‌ಗಳನ್ನು ಸ್ಥಾಪನೆ ಮಾಡಿದ್ದೇವೆ. ಇದುವರೆಗೆ 25,800 ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದೇವೆ. ಸಂಸ್ಥೆಯ ಸಿಎಸ್‌ಆರ್ ಉಪಕ್ರಮಗಳು ದುರ್ಬಲ ವರ್ಗದ ಸಮುದಾಯಗಳಿಗೆ ವೈದ್ಯಕೀಯ ನೆರವು, ವಸತಿ ನಿರ್ಮಾಣ ಮತ್ತು ಅಗತ್ಯವಿರುವ ಹೆಣ್ಣು ಮಕ್ಕಳ  ವಿವಾಹಕ್ಕೆ ಹಣಕಾಸು ನೆರವು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ನೀಡುವ ಮೂಲಕ ಈ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಣೆ ಮಾಡುವ ಉದ್ದೇಶವನ್ನು ಹೊಂದಿದೆ. 


ಇಲ್ಲಿವರೆಗೆ ಮಲಬಾರ್ ಗ್ರೂಪ್ ಇಂತಹ ಅನೇಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳಿಗೆ 282.29 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಿದೆ. ಈ ಮೂಲಕ ಸುಸ್ಥಿರ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಶಿಕ್ಷಣ ಮತ್ತು ಹಸಿವು ಸಮಸ್ಯೆಗಳಿಗೆ ಪರಿಹಾರದಂತಹ ಪ್ರಭಾವಶಾಲಿ ಉಪ ಕ್ರಮಗಳ  ಮೇಲೆ ಮಲಬಾರ್ ಗ್ರೂಪ್‌ನ ನಿರಂತರ ಗಮನವು ಸಮುದಾಯಗಳು ಸಬಲೀಕರಣ ಗೊಂಡಾಗ ಮತ್ತು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಬೆಂಬಲಿಸಿದಾಗ ಮಾತ್ರ ಸುಸ್ಥಿತ ಬೆಳವಣಿಗೆ ಸಾಧ್ಯ ಎಂಬುದನ್ನು ಕಂಪನಿಯು ನಂಬುತ್ತದೆ.


ಈ ಗ್ರೂಪ್ ತನ್ನ ವ್ಯಾಪಾರ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ವಿಸ್ತರಿಸುವುದನ್ನು ಮುಂದುವರಿಸಿ ಕೊ೦ಡು ಬರುತ್ತಿರುವುದರಿಂದ ಈ ಸಮರ್ಪಣೆಯು ಭವಿಷ್ಯದ ಎಲ್ಲಾ ಪ್ರಯತ್ನಗಳ ಹೃದಯದಲ್ಲಿ ಅಚ್ಚಳಿಯದೇ ಉಳಿಯುತ್ತದೆ.