ಎಸ್ಉ ಕೆ ಪಿ ಎ ಉಡುಪಿ ವಲಯದ ವತಿಯಿಂದ ಆಯೋಜನೆ
ಉಡುಪಿ ; ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶೆನ್ (ರಿ ) ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವತಿಯಿಂದ ನೆಡೆದ ಶಿವ - ಜಯ ಟ್ರೋಫಿ 2025 ಉಡುಪಿ ಬೀಡಿನ ಗುಡ್ಡೆಯ ಕ್ರೀಡಾಂಗಣ ದಲ್ಲಿ ನೆಡೆಯಿತು.
ಉದ್ಘಾಟನೆಯನ್ನು ಉಡುಪಿ ಮದರ್ ಆಫ್ ಸಾರೊಸ್ ಚರ್ಚ್ ಧರ್ಮಗುರುಗಳಾದ ವಂದನೀಯ ಚಾರ್ಲ್ಸ್ ಮಿನೇಜಸ್ ದೀಪ ಬೆಳಗಿಸಿ ಚಾಲನೆ ನೀಡಿ ಛಾಯಾಗ್ರಾಹಕರು ತಮ್ಮ ವೃತ್ತಿ ಜೊತೆ ಇಂತಹ ಕ್ರೀಡಾಕೂಟದಿಂದ ದೈಹಿಕ ಅರೋಗ್ಯ , ಒತ್ತಡ ನಿವಾರಣೆ, ವ್ಯಕ್ತಿ ವಿಕಸನ , ಐಕ್ಯತೆ ಹಾಗೂ ಸಂಘಟನೆ ಬೆಳವಣಿಗೆ ಪೂರ್ವಕವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿ ಸೇರಿದ 14 ವಲಯದ ತಂಡ ಭಾಗವಹಿಸಿರುವುದು ಸಾಕ್ಷಿ ಎಂದು ಶುಭ ಹಾರೈಸಿದರು.
ಮುಖ್ಯ ಅಥಿತಿಗಳಾಗಿ ಎಸ್ ಕೆ ಪಿ ಎ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ , ಉಡುಪಿ ವಕೀಲ ಸಂಘದ ಅಧ್ಯಕ್ಷರಾದ ರೊನಾಲ್ಡ್ ಪ್ರವೀಣ್ ಕುಮಾರ್ , ಮಾಜಿ ಅಧ್ಯಕ್ಷರಾದ ವಿಲ್ಸ್ ನ್ ಗೊನ್ಸ್ಲಾವೀಸ್ , ಎಸ್ ಕೆ ಪಿ ಎ ಸಹಕಾರ ಸೊಸೈಟಿಯ ಅಧ್ಯಕ್ಷ ವಾಸುದೇವ ರಾವ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ್ , ಗೌರವಾಧ್ಯಕ್ಷರಾದ ನವೀನ್ ಬಳ್ಳಾಲ್ ಹಾಗೂ ಉಡುಪಿ ವಲಯದ ಕಾರ್ಯದರ್ಶಿ ದಿವಾ ಕರ ಹಿರಿಯಡಕ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕೊರೆಯ, ಸಂಗೊಳ್ಳಿ ರಾಯಣ್ಣ ಬಳಗದ ಅಧ್ಯಕ್ಷ ಸಿದ್ದ ಬಸ ಯ್ಯ ಸ್ವಾಮಿ ಚಿಕ್ಕಮಠ.
ಹರ್ಷಲಾ ಧನ್ಯರಾಜ್ , ಸಂದೇಶ್ ಬಲ್ಲಾಳ್ , ಕ್ರೀಡಾ ಕಾರ್ಯದರ್ಶಿ ಅಶೋಕ್ ಪುತ್ರನ್, ಕೋಶಾಧಿ ಕಾರಿ ರಮೇಶ್ ಎಳ್ಳೂರು ಪಾಧಿಕಾರಿಗಳಾದ ರತನ್ಸುರಭಿ, ಪ್ರವೀಣ್ ಕಿದಿಯೂರು ಮತ್ತು ರಮೇಶ್ ಕಿದಿಯೂರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ 14 ವಲಯದ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ವಲಯಾಧ್ಯಕ್ಷ ಸುಧೀರ್ ಎಂ. ಶೆಟ್ಟಿ ಸ್ವಾಗತಿಸಿದರು , ರಾಘವ್ ಸೇರಿಗಾರ ನಿರೂಪಿಸಿದರು ವಲಯಾಧ್ಯಕ್ಷ ಸುಧೀರ್ ಎಂ. ಶೆಟ್ಟಿ ಸ್ವಾಗತಿಸಿದರು.