Header Ads Widget

​ಜಯನ್ ಮಲ್ಪೆಗೆ ಬಾಬು ಜಗಜೀವನ ರಾಂ ಪ್ರಶಸ್ತಿ​ ಪ್ರಧಾನ

ಉಡುಪಿ: ಕರ್ನಾಟಕ​ ಸರಕಾರ ಕೊಡಮಾಡುವ 2​025ನೇ ಸಾಲಿನ,​ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ ನಾಯಕ,​ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬಾ ಜಗಜೀವನ​ ರಾಂ ಪ್ರತಿಷ್ಠಿತ ಪ್ರಶಸ್ತಿಯನ್ನು ದಲಿತಚಿಂತಕ ಹಾಗೂ ಜನಪರ ಹೋರಾ​ಟಗಾರ​ ಜಯನ್ ಮಲ್ಪೆಗೆ ಶನಿವಾರ ಮುಖ್ಯಮಂತ್ರಿ​ ಸಿದ್ಧರಾಮಯ್ಯ ಪ್ರಧಾನ ಮಾಡಿದರು.



ಕಳೆದ ೪ ದಶಕಕ್ಕೂ ಹೆಚ್ಚು ಕಾಲ​ ಕರಾವಳಿ ಮತ್ತು ಮಳೆನಾಡಿನ ಊದ್ದಕ್ಕೂ​ ದುರ್ಬಲರಲ್ಲಿ,ಅಸ ಹಾಯಕರಲ್ಲಿ ಸ್ವಾಭಿಮಾನ ಮೂಡಿಸಿ ಸಂಘಟನೆಯ​ ಪ್ರಜ್ಞಾವ​೦ತಿಕೆಯನ್ನು ಬೆಳೆಸಿದ ಜಯನ್ಮಲ್ಪೆಗೆ ಈ ಬಾರಿ ಸರಕಾರವೇ ಗುರುತಿಸಿ​ ಪ್ರಶಸ್ತಿ ನೀಡಿರುವುದು ವಿಶೇಷ ಮತ್ತು ಉಡುಪಿಜಿಲ್ಲೆಗೆ ಇತಿಹಾಸದಲ್ಲಿ ಇದು ಪ್ರಥಮವಾಗಿದೆ.


ನಾಡಿನ ಕೋಮು ಸೌಹಾರ್ದತೆಗಾಗಿ ವಿವಿಧ​ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಜಯನ್ಮಲ್ಪೆ, ಅಧಿಕಾರಿಗಳ ಭ್ರಷ್ಟತೆ, ಬಂಡವಾಳಶಾಹಿಗಳ ದೌರ್ಜನ್ಯ,ಪೊಲೀಸರ​ ಅಮಾನವೀಯತೆ,ರಾಜ ಕಾರಣಿಗಳ ಹುಸಿ​ ಜಾತ್ಯಾತೀತತೆ ಬಯಲಿಗೆಳೆದು ಹೋರಾಟ​ ಮಾಡುತ್ತಾ, ದಲಿತ ಜಾಗೃತಿಗಾಗಿ ನೂರಾರು​ ವಿಚಾರ ಸಂಕಿರಣ, ಸಮಾವೇಶ ಮಾಡಿದ್ದರು.


ಅನ್ಯಾಯಕ್ಕೊಳಗಾದವರ​ ಪರವಾಗಿ,ಪ್ರತಿಭಟನೆ,ಮೆರವಣಿಗೆ,​ ಧರಣಿ​ ಮುಂತ್ತಾದ ಕಾರ್ಯಕ್ರಮಗಳನ್ನುಸಂಘಟಿಸಿದ್ದ ಜಯನ್ ಮಲ್ಪೆ ಒಂದು ಕಾಲದಲ್ಲಿ​ ದಲಿತ ಚಳವಳಿಯ ಆಳದಮರದ ಮರವಾಗಿಬೆಳೆದಿದ್ದರು.​ ಮುಂಗಾರು ದಿನಪತ್ರಿಕೆ,ಸುದ್ಧಿಸಂಗಾತಿ ವಾರಪತ್ರಿಕೆ ಹಾಗೂ ಮುಂಬಾಯಿ​೦​ ಪ್ರಕಟ ವಾಗುತ್ತಿದ್ದ ಉದಯ ದೀಪ​ ದಿನಪತ್ರಿಕೆಯ ವರದಿಗಾರರಾಗಿ ಕೆಲಸ​ ಮಾಡಿದ್ದ ಜಯನ್ ಮಲ್ಪೆಯವರು ನಾಡಿನ​ ಅನೇಕ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ​ ಲೇಖನಗಳನ್ನು ಬರೆದಿದ್ದಾರೆ. 


2​021ರಲ್ಲಿ​ ಭಾರತೀಯ ಸಣ್ಣ ಮತ್ತು ಮಧ್ಯಮ​  ಪತ್ರಿಕೆಗಳ ಒಕ್ಕೂಟ ವಡ್ಡರ್ಸೆ ರಘುರಾಮ​ ಶೆಟ್ಟಿ ಪ್ರಶಸ್ತಿ, 2020ರ ರಾಷ್ಟೀಯ ಪತ್ರಿಕಾ​ ದಿನಾಚರಣೆಯ ಅಂಗವಾಗಿ ಕಾರ್ಕಳ​ ಪತ್ರಕರ್ತರ ಸಂಘ ಜನದನಿ ಸಿರಿ ಪ್ರಶಸ್ತಿ,​ 2018ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ​ ಜಿಲ್ಲಾಮಟ್ಟದ ಸದಸ್ಯರನ್ನಾಗಿ ರಾಜ್ಯ ಸರಕಾರಆಯ್ಕೆ ಮಾಡಿತ್ತು.


ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ​ ನವದೆಹಲಿ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ​ ಕಾರ್ಯನಿರ್ವಾಹಿ ಸಿರುವ ಇವರು ದಲತ್ ವರ್ಲ್ಡ್ ವೆಬ್​ ಸೈಟ್‌ನ್ನು​ ಲೋಕಾರ್ಪಣೆಗೊಳಿಸಿರುತ್ತಾರೆ.ಕಳೆದ​ ಒಂದುವರೆ ವರ್ಷದಿಂದ ದಿವಾಣ ಪಂಚ್ ಯುಟ್ಯೂಬ್ ಚಾನಲ್‌ನಲ್ಲಿ ಒಂದು ವರ್ಷಗಳ ಕಾಲ ನಾಡಿನ​ ರಾಜಕೀಯ ಹಾಗೂ ವಿವಿಧ ವಿದ್ಯಮಾನಗಳ ಬಗ್ಗೆ​ ವಿಶ್ಲೇಷಣೆ ಮಾಡಿದ ಎಪಿಸೋಡು ಬಾರೀ​ ಜನಪ್ರೀಯತೆ ಹೊಂ ದಿತ್ತು.


ನಿರ0ತರ ಹೋರಾಟಗಾರರಾಗಿದ್ದ ಜಯನ್​ ಮಲ್ಪೆ ರಕ್ತ ಸುರಿಸಿ ಕಟ್ಟಿದ ಸಂಘಟನೆಗಳು​ ಕೆಲವರ ಸ್ವಾರ್ಥಕ್ಕಾಗಿ ಬಲಿಯಾಗುವುದನ್ನು​ ಕಂಡು ಕಳೆದ ಹತ್ತು ವರ್ಷದಿಂದ ಜಿಲ್ಲೆಯಲ್ಲಿ​ ದಲಿತ ಯುವಕ, ಯುವತಿಯರಲ್ಲಿ ಅಂಬೇಡ್ಕರ್ ಚಿ​೦ತನೆಯನ್ನು ಹುಟ್ಟುಹಾಕಿ,ಅಂಬೇಡ್ಕರ್​ ಯುವಸೇನೆ ಎಂಬ ಸಂಘ ಟನೆ ಮೂಲಕ ಹೊಸ​ ನಾಯಕತ್ವಕ್ಕೆ ಚಾಲನೆ ನೀಡಿದ್ದಾರೆ.​ 


ಜಯನ್ ಮಲ್ಪೆಯವರ ಬದುಕು ಮತ್ತು​ ಹೋರಾಟ ಹಾಗೂ ಸಾಹಿತ್ಯವನ್ನು ಮನಗಂಡ​ ಸರಕಾರ ೨೦೨೫ ನೇ ಸಾಲಿನ ಡಾ.ಬಾಬಾ ಜಗಜೀವನ​ ರಾಂ ಪ್ರಶಸ್ತಿಯ ಜೊತೆಗೆ ಸುಮಾರು 5ಲಕ್ಷ​ ನಗದು ಮತ್ತು 2​0ಗ್ರಾಂ.ಚಿನ್ನದ ಪದಕ​  ಹಾಗೂ ಪ್ರಶಸ್ತಿ ಫಲಕ ನೀಡಿ ಮುಖ್ಯಮಂತ್ರಿ​ ಸಿದ್ಧರಾಮಯ್ಯ ಗೌರವಿಸಿದರು.


ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ​ ಶಿವಕುಮಾರ್,ಸಮಾಜ ಕಲ್ಯಾಣ ಸಚಿವ​ ಮಹಾದೇವಪ್ಪ, ವಿಧಾನ ಪರಿಷತ್ ಸ್ಪೀಕರ್ ಬಸವರಾಜ್ ಹೊರಟಿ, ಸಚಿವರುಗಳಾದ   ಜಿ.ಪರವೇಶ್ವರ್, ಮುನಿಯಪ್ಪ, ರಾಮ ಲಿಂಗ ರೆಡ್ಡಿ​ ಮುಂತಾದವರು ಪ್ರಶಸ್ತಿ ಸಮಾರಂಭದಲ್ಲಿ​ ಸಾಕ್ಷಿಯಾಗಿದ್ದರು.